ಜ್ಞಾನ ಮತ್ತು ತರಬೇತಿಗಿಂತ ನಂಬಿಗಸ್ತಿಕೆಯು ಆತ್ಮೀಕ ಪರಿಪಕ್ವತೆಯ ಉತ್ತಮ ಅಳತೆಯಾಗಿದೆ. ನಾವು ಶಿಷ್ಯರನ್ನು ಅಧಿವಾಗಿ ಮಾಡಿದಾಗ, ನಾವು ಸರಿಯಾದವಿಷಯಗಳನ್ನು ಅಳೆಯುತ್ತಿದ್ದೇವೆ ಎಂದು ಖಚಿತಪಡಿಸಿಕೊಳ್ಳೋಣ. ನಾವು ಕೇಳಿದಕ್ಕೆ ವಿಧೇಯರಾದರೆ ಮತ್ತು ಇತರರೊಂದಿಗೆ ಹಂಚಿಕೊಂಡರೆ, ನಾವು ನಂಬಿಗಸ್ತರಾಗಿದ್ದೇವೆ. ನಾವು ಕೇಳಿದರೆ ಆದರೆ ನಾವು ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಿರಾಕರಿಸಿದರೆ, ನಾವು ಅಪನಂಬಿಗಸ್ತರಾಗಿದ್ದೇವೆ.

ಈ ವಿಡಿಯೋ ವೀಕ್ಷಿಸಿ

ಇಂದು ಸಭೆಯಲ್ಲಿ ಹಲವಾರು ಸಮಸ್ಯೆಗಳನ್ನು ಉಂಟುಮಾಡುವ ಎರಡು ವಿಚಾರಗಳಿವೆ.

ಮೊದಲನೆಯದು, ಒಬ್ಬರ ಆತ್ಮೀಕ ಪರಿಪಕ್ವತೆಯು ದೇವರ ವಾಕ್ಯದ ಬಗ್ಗೆ ಅವರಿಗೆ ಎಷ್ಟು ತಿಳಿದಿದೆ ಎಂಬುದಕ್ಕೆ ಸಂಬಂಧಿಸಿದೆ. ಅವರು ಸರಿಯಾದ ನಂಬಿಕೆ ಅಥವಾಸಾಂಪ್ರದಾಯಿಕತೆಯು ಒಬ್ಬರ ನಂಬಿಕೆಗೆ ಉತ್ತಮ ಅಳತೆಯಾಗಿದೆ ಎಂದು ಹೇಳುತ್ತಾರೆ.

ಎರಡನೆಯದು, ಅವರು ಸೇವೆಯನ್ನು ಪ್ರಾರಂಭಿಸುವುದಕ್ಕೆ ಮೊದಲು ಒಬ್ಬರ ನಾಯಕತ್ವದ ಸಾಮರ್ಥ್ಯಕ್ಕೆ "ಸಂಪೂರ್ಣ ತರಬೇತಿ" ಅಗತ್ಯವಿದೆ ಎಂಬ ಕಲ್ಪನೆಹೊಂದಿರುವರು. ಅವರು ಸಂಪೂರ್ಣ ಜ್ಞಾನವು - ಒಬ್ಬರ ಸೇವೆ ಮಾಡುವ ಸಾಮರ್ಥ್ಯಕ್ಕೆ ಉತ್ತಮ ಅಳತೆಯಾಗಿದೆ ಎಂದು ಹೇಳುತ್ತಾರೆ.

ಮೊದಲ ಕಲ್ಪನೆಯೊಂದಿಗಿರುವ ಸಮಸ್ಯೆ – ಇದು ಸಾಂಪ್ರದಾಯಿಕತೆಯ ಮೇಲೆ ಅವಲಂಬಿತವಾಗಿದೆ - ಅಥವಾ "ಸರಿಯಾದ ನಂಬಿಕೆ" ಎಂದರೆ ಸೈತಾನನು ಯಾವುದೇಮನುಷ್ಯನಿಗಿಂತ ಹೆಚ್ಚು ಗ್ರಂಥವನ್ನು ತಿಳಿದಿದ್ದಾನೆ. ದೇವರ ವಾಕ್ಯವು ಹೀಗೆ ಹೇಳುತ್ತದೆ - ಒಬ್ಬನೇ ದೇವರಿದ್ದಾನೆಂದು ನೀವು ನಂಬುತ್ತೀರಿ. ಒಳ್ಳೆಯದು! ದೆವ್ವಗಳು ಸಹಅದನ್ನು ನಂಬಿ ನಡುಗುತ್ತವೆ.

ಒಬ್ಬರ ಆತ್ಮೀಕ ಪರಿಪಕ್ವತೆಯ ಉತ್ತಮ ಅಳತೆ ಸರಿಯಾದ ಕ್ರಿಯೆ - "ಸರಿಯಾದ ಅಭ್ಯಾಸ" ಆಗಿದೆ.

ನಾವು ತಿಳಿದಿರುವ ಆಧಾರದ ಮೇಲೆ ಪ್ರರಿಪಕ್ವತೆಯನ್ನು ಅಳೆಯುವುದಕ್ಕಿಂತ ವಿಧೇಯರಾಗುವಲ್ಲಿ ಮತ್ತು ಸಾರುವಲ್ಲಿ ನಂಬಿಗಸ್ತಿಕೆಯೊಂದಿಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ.

ಎರಡನೆಯ ಕಲ್ಪನೆಯ ಸಮಸ್ಯೆ - ಅವರು ಮುನ್ನಡೆಸುವ ಮೊದಲು ಯಾರಾದರೂ ಸಂಪೂರ್ಣವಾಗಿ ತರಬೇತಿ ಪಡೆಯಬೇಕು ಎಂಬುದೇ, ಆದರೆ ಒಬ್ಬರಾದರೂಸಂಪೂರ್ಣವಾಗಿ ತರಬೇತಿ ಪಡೆದಿರುವದಿಲ್ಲ.

ದೇವರ ರಾಜ್ಯದಲ್ಲಿ ಕೆಲವು ಪ್ರಮುಖ ಕೆಲಸವನ್ನು ಮಾಡಲು ಕಲಿಯಲು ಇನ್ನೂ ಅನೇಕ ವಿಷಯಗಳನ್ನು ಹೊಂದಿರುವ ಯುವ ನಾಯಕರನ್ನು ಕಳುಹಿಸಲು ಯೇಸುಮಾದರಿಯಾಗಿದ್ದನು.

ದೇವರ ವಾಕ್ಯವು ಹೀಗೆ ಹೇಳುತ್ತದೆ - ಯೇಸು ತನ್ನ ಹನ್ನೆರಡು ಅಪೊಸ್ತಲರನ್ನು ಒಟ್ಟಿಗೆ ಕರೆದು ಅವರಿಗೆ ಎಲ್ಲಾ ದೆವ್ವಗಳು ಮತ್ತು ರೋಗಗಳ ಮೇಲೆ ಸಂಪೂರ್ಣಅಧಿಕಾರವನ್ನು ಕೊಟ್ಟನು. ನಂತರ ಅವರು ದೇವರ ರಾಜ್ಯದ ಬಗ್ಗೆ ಹೇಳಲು ಮತ್ತು ರೋಗಿಗಳನ್ನು ಗುಣಪಡಿಸುವುದಕ್ಕಾಗಿ ಅವರನ್ನು ಕಳುಹಿಸಿದರು.

ಯೇಸು ರಕ್ಷಕನೆಂದು ಪೇತ್ರನು ತನ್ನ ನಂಬಿಕೆಯನ್ನು ಹಂಚಿಕೊಳ್ಳುವುದಕ್ಕೆ ಮೊದಲು ಈ ಜನರನ್ನು ಕಳುಹಿಸಿದನು – ಇದನ್ನು ನಾವು ನಂಬಿಕೆಯ ಮೊದಲ ಹೆಜ್ಜೆ ಎಂದುಪರಿಗಣಿಸುತ್ತೇವೆ. ಮತ್ತು ಕಳುಹಿಸಲ್ಪಟ್ಟ ನಂತರವೂ ಯೇಸು ಪೇತ್ರನನ್ನು ತಪ್ಪುಗಳಿಗಾಗಿ ಅನೇಕ ಸಾರಿ ಖಂಡಿಸಿದನು ಮತ್ತು ಪೇತ್ರನು ನಂತರವೂ ಯೇಸುವನ್ನುಸಂಪೂರ್ಣವಾಗಿ ನಿರಾಕರಿಸಿದನು. ಇತರ ಹಿಂಬಾಲಕರು ಯಾರು ಶ್ರೇಷ್ಠರು ಮತ್ತು ದೇವರ ಭವಿಷ್ಯದ ರಾಜ್ಯದಲ್ಲಿ ಪ್ರತಿಯೊಬ್ಬರೂ ಯಾವ ಪಾತ್ರವನ್ನು ವಹಿಸುತ್ತಾರೆಎಂಬುದನ್ನು ಕುರಿತು ವಾದಿಸಿದರು.

ಅವರೆಲ್ಲರೂ ಇನ್ನೂ ಕಲಿಯಲು ಬಹಳಷ್ಟು ಹೊಂದಿದ್ದರು ಆದರೆ ಯೇಸು ಅವರಿಗೆ ಈಗಾಗಲೇ ತಿಳಿದಿದ್ದನ್ನು ಹಂಚಿಕೊಳ್ಳುವಂತೆ ಕಾರ್ಯಮಾಡಿದನು.

ನಂಬಿಗಸ್ತಿಕೆಯು - ಜ್ಞಾನಕ್ಕಿಂತ ಹೆಚ್ಚಾದದ್ದು - ಯಾರಾದರೂ ಯೇಸುವನ್ನು ಅನುಸರಿಸಲು ಪ್ರಾರಂಭಿಸಿದ ತಕ್ಷಣವೇ ಪ್ರಾರಂಭಿಸಬಹುದು. ಪರಿಪಕ್ವತೆಯು ಸಮಯ-ಅವಲಂಬಿತವಾಗಿದೆ, ಆದರೆ ಶಿಷ್ಯನ ಜೀವನದಲ್ಲಿ ಯಾವುದೇ ಮತ್ತು ಪ್ರತಿ ಹಂತದಲ್ಲಿಯೂ ನಂಬಿಗಸ್ತಿಕೆಯನ್ನು ತೋರ್ಪಡಿಸಬಹುದು.

ನಿಮ್ಮನ್ನೇ ಕೇಳಿ

  • ನಿಮಗೆ ಈಗಾಗಲೇ ತಿಳಿದಿರುವ ದೇವರ ಆಜ್ಞೆಗಳನ್ನು ಕುರಿತು ಯೋಚಿಸಿ. ಆ ವಿಷಯಗಳಿಗೆ ವಿಧೇಯರಾಗುವ ಮತ್ತು ಸಾರುವ ವಿಷಯದಲ್ಲಿ ನೀವು ಎಷ್ಟು"ನಂಬಿಗಸ್ತರಾಗಿದ್ದೀರಿ"?

ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!

  • ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
  • ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
  • ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
  • ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!

ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.

ಇಡೀ ತರಬೇತಿಯನ್ನು ನೋಡಿ


ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.

ಜೂಮ್ ದರ್ಶನದ ಬಗ್ಗೆ ಇನ್ನಷ್ಟು ತಿಳಿಯಿರಿ

Loading...

ಭಾಷೆ


English English
العربية Arabic
العربية - الأردن Arabic (JO)
Sign Language American Sign Language
भोजपुरी Bhojpuri
বাংলা Bengali (India)
Bosanski Bosnian
粵語 (繁體) Cantonese (Traditional)
Hrvatski Croatian
فارسی Farsi/Persian
Français French
Deutsch German
ગુજરાતી Gujarati
Hausa Hausa
हिंदी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
國語(繁體) Mandarin (Traditional)
国语(简体) Mandarin (Simplified)
मराठी Marathi
മലയാളം Malayalam
नेपाली Nepali
ଓଡ଼ିଆ Oriya
Apagibete Panjabi
Português Portuguese
русский Russian
Română Romanian
Slovenščina Slovenian
Español Spanish
Soomaaliga Somali
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اُردُو Urdu
Tiếng Việt Vietnamese
Yorùbá Yoruba
More languages in progress