ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ
ದೇವರ ಕಥೆಯನ್ನು ಹಂಚಿಕೊಳ್ಳಲು ಹಲವು ಮಾರ್ಗಗಳಿವೆ. ಉತ್ತಮ ಮಾರ್ಗವು ನೀವು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಅವರ ಪ್ರಪಂಚದ ದೃಷ್ಟಿಕೋನ ಮತ್ತು ಅವರಜೀವನದ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇಳಲು ಸಿದ್ಧರಿರುವ ಹೃದಯಗಳ ಮೇಲೆ ಕೆಲಸ ಮಾಡಲು ಹಂಚಿಕೊಳ್ಳಲು ಸಿದ್ಧರಿರುವ ಹೃದಯಗಳನ್ನುದೇವರು ಉಪಯೋಗಿಸುತ್ತಾನೆ.
ದೇವರ ಕಥೆಯನ್ನು ಹಂಚಿಕೊಳ್ಳಲು ಒಂದು ಮಾರ್ಗವೆಂದರೆ ದೇವರ ಸೃಷ್ಟಿಯಿಂದ ಈ ಯುಗದ ಅಂತ್ಯದಲ್ಲಿ ಆತನ ನ್ಯಾಯತೀರ್ಪಿನವರೆಗೆ ಏನಾಯಿತು ಎಂಬುದನ್ನುವಿವರಿಸುವುದಾಗಿದೆ.
ಈ ವಿಡಿಯೋ ವೀಕ್ಷಿಸಿ
ದೇವರ ಕಥೆ: ಸೃಷ್ಟಿ ಇಂದ ನ್ಯಾಯತೀರ್ಪಿನ ಶೈಲಿಯ ವರೆಗೆ
ಆದಿಯಲ್ಲಿ, ದೇವರು ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಉಂಟುಮಾಡಿದನು. ಆತನು ಮೊದಲ ಪುರುಷನು ಮತ್ತು ಮೊದಲ ಸ್ತ್ರೀಯನ್ನುಉಂಟುಮಾಡಿದನು. ಆತನು ಅವುಗಳನ್ನು ಸುಂದರವಾದ ಉದ್ಯಾನವನದಲ್ಲಿ ಇಟ್ಟನು. ಆತನು ಅವರನ್ನು ತನ್ನ ಕುಟುಂಬದ ಭಾಗವನ್ನಾಗಿ ಮಾಡಿಕೊಂಡು ಅವರೊಂದಿಗೆನಿಕಟ ಸಂಬಂಧವನ್ನು ಹೊಂದಿದ್ದನು. ಅವರು ನಿತ್ಯವಾಗಿ ಬದುಕಲು ಅವರನ್ನು ಸೃಷ್ಟಿಸಿದನು. ಸಾವು ಎಂಬುದು ಇರಲಿಲ್ಲ.
ಈ ಪರಿಪೂರ್ಣ ಸ್ಥಳದಲ್ಲಿಯೂ ಸಹ, ಮನುಷ್ಯನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಪಾಪ ಮತ್ತು ದುಃಖವನ್ನು ಜಗತ್ತಿಗೆ ತಂದನು. ದೇವರು ಮನುಷ್ಯನನ್ನುತೋಟದಿಂದ ಹೊರಹಾಕಿದನು. ಮನುಷ್ಯನು ಮತ್ತು ದೇವರ ನಡುವಿನ ಸಂಬಂಧವು ಮುರಿದುಹೋಯಿತು. ಈಗ ಮನುಷ್ಯನು ಸಾವನ್ನು ಎದುರಿಸಬೇಕಾಯಿತು.
ನೂರಾರು ವರ್ಷಗಳಿಂದ, ದೇವರು ಜಗತ್ತಿಗೆ ಸಂದೇಶವಾಹಕರನ್ನು ಕಳುಹಿಸುತ್ತಲೇ ಇದ್ದನು. ಅವರು ಮನುಷ್ಯನಿಗೆ ಅವನ ಪಾಪವನ್ನು ನೆನಪಿಸಿದನು ಆದರೆ ದೇವರನಂಬಿಗಸ್ತಿಕೆ ಮತ್ತು ಜಗತ್ತಿಗೆ ರಕ್ಷಕನನ್ನು ಕಳುಹಿಸುವ ವಾಗ್ದಾನದ ಬಗ್ಗೆ ಹೇಳಿದರು. ರಕ್ಷಕನು ದೇವರು ಮತ್ತು ಮನುಷ್ಯನ ನಡುವಿನ ನಿಕಟ ಸಂಬಂಧವನ್ನುಪುನಃಸ್ಥಾಪಿಸುವನು. ರಕ್ಷಕನು ಮನುಷ್ಯನನ್ನು ಸಾವಿನಿಂದ ರಕ್ಷಿಸುತ್ತಾನೆ. ರಕ್ಷಕನು ನಿತ್ಯಜೀವವನ್ನು ಕೊಡುತ್ತಾನೆ ಮತ್ತು ನಿತ್ಯವಾಗಿ ಮನುಷ್ಯರೊಂದಿಗೆ ಇರುತ್ತಾನೆ.
ದೇವರು ನಮ್ಮನ್ನು ಎಷ್ಟೋ ಪ್ರೀತಿಸಿದನು, ಅಂದರೆ ಸರಿಯಾದ ಸಮಯ ಬಂದಾಗ, ಆತನು ತನ್ನ ಮಗನನ್ನು ಆ ರಕ್ಷಕನಾಗಿರಲು ಲೋಕಕ್ಕೆ ಕಳುಹಿಸಿದನು. ಯೇಸು ದೇವರಮಗನಾಗಿದ್ದನು. ಆತನು ಕನ್ಯೆಯ ಮೂಲಕ ಜಗತ್ತಿನಲ್ಲಿ ಜನಿಸಿದನು. ಆತನು ಪರಿಪೂರ್ಣ ಜೀವನವನ್ನು ನಡೆಸಿದನು. ಆತನು ಎಂದಿಗೂ ಪಾಪ ಮಾಡಲಿಲ್ಲ. ಯೇಸುದೇವರ ಬಗ್ಗೆ ಜನರಿಗೆ ಬೊಧಿಸಿದನು. ಆತನು ತನ್ನ ಮಹಾನ್ ಶಕ್ತಿಯನ್ನು ತೋರಿಸುವ ಅನೇಕ ಅದ್ಭುತಗಳನ್ನು ಮಾಡಿದನು. ಆತನು ಅನೇಕ ದೆವ್ವಗಳನ್ನು ಓಡಿಸಿದನು.ಆತನು ಅನೇಕ ಜನರನ್ನು ಗುಣಪಡಿಸಿದನು. ಕುರುಡರಿಗೆ ಕಾಣುವಂತೆ ಮಾಡಿದನು. ಆತನು ಕಿವುಡರನ್ನು ಕೇಳುವಂತೆ ಮಾಡಿದನು. ಕುಂಟರು ನಡೆಯುವಂತೆ ಮಾಡಿದನು. ಯೇಸು ಸತ್ತವರನ್ನು ಸಹ ಎಬ್ಬಿಸಿದನು. ಅನೇಕ ಧಾರ್ಮಿಕ ಮುಖಂಡರು ಯೇಸುವಿನ ಬಗ್ಗೆ ಹೆದರಿಕೊಂಡರು ಮತ್ತು ಅಸೂಯೆ ಪಟ್ಟರು. ಅವರು ಆತನನ್ನು ಕೊಲ್ಲಲುಬಯಸಿದರು. ಆತನು ಎಂದಿಗೂ ಪಾಪ ಮಾಡದ ಕಾರಣ, ಯೇಸು ಸಾಯಬೇಕಾಗಿರಲಿಲ್ಲ. ಆದರೆ ಆತನು ನಮ್ಮೆಲ್ಲರಿಗೂ ಯಜ್ಞವಾಗಿ ಸಾಯಲು ಆಯ್ಕೆಮಾಡಿಕೊಂಡನು. ಆತನ ನೋವಿನ ಮರಣವು ಮಾನವಕುಲದ ಪಾಪಗಳನ್ನು ಮುಚ್ಚಿಹಾಕಿತು. ನಂತರ, ಯೇಸುವನ್ನು ಸಮಾಧಿಯಲ್ಲಿ ಹೂಣಿಡಲಾಯಿತು.
ಯೇಸು ಮಾಡಿದ ತ್ಯಾಗವನ್ನು ದೇವರು ನೋಡಿ ಅದನ್ನು ಸ್ವೀಕರಿಸಿದನು. ಮೂರನೆಯ ದಿನದಲ್ಲಿ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸುವ ಮೂಲಕ ದೇವರು ತನ್ನಅಂಗೀಕಾರವನ್ನು ತೋರಿಸಿದನು. ನಮ್ಮ ಪಾಪಗಳಿಗಾಗಿ ನಾವು ಯೇಸುವಿನ ತ್ಯಾಗವನ್ನು ನಂಬಿ ಸ್ವೀಕರಿಸಿದರೆ -- ನಾವು ನಮ್ಮ ಪಾಪಗಳಿಂದ ದೂರವಿದ್ದರೆ ಮತ್ತುಯೇಸುವನ್ನು ಅನುಸರಿಸಿದರೆ, ದೇವರು ನಮ್ಮನ್ನು ಎಲ್ಲಾ ಪಾಪಗಳಿಂದ ಬಿಡಿಸಿ ಶುದ್ಧೀಕರಿಸುತ್ತಾನೆ ಮತ್ತು ನಮ್ಮನ್ನು ತನ್ನ ಕುಟುಂಬಕ್ಕೆ ಮರಳಿ ಸ್ವಾಗತಿಸುತ್ತಾನೆ ಎಂದುದೇವರು ಹೇಳಿದನು. ನಮ್ಮೊಳಗೆ ವಾಸಿಸಲು ಮತ್ತು ಯೇಸುವನ್ನು ಅನುಸರಿಸಲು ನಮಗೆ ಸಾಧ್ಯವಾಗುವಂತೆ ಮಾಡಲು ದೇವರು ಪವಿತ್ರಾತ್ಮನನ್ನು ಕಳುಹಿಸಿದನು.
ಈ ಪುನಃಸ್ಥಾಪಿಸಿದ ಸಂಬಂಧವನ್ನು ತೋರಿಸಲು ಮತ್ತು ಮುದ್ರಿಸಲ್ಪಡಲು ನಾವು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ. ಸಾವಿನ ಸಂಕೇತವಾಗಿ ನಾವು ನೀರಿನ ಕೆಳಗೆಸಮಾಧಿ ಮಾಡಲ್ಪಟ್ಟಿದ್ದೇವೆ. ಹೊಸ ಜೀವನದ ಸಂಕೇತವಾಗಿ ನಾವು ಯೇಸುವನ್ನು ಅನುಸರಿಸಲು ನೀರಿನಿಂದ ಎಬ್ಬಿಸಲ್ಪಟ್ಟಿದ್ದೇವೆ. ಯೇಸು ಸತ್ತವರೊಳಗಿಂದ ಎದ್ದುಬಂದನಂತರ, ಆತನು ಭೂಮಿಯ ಮೇಲೆ 40 ದಿನಗಳನ್ನು ಕಳೆದನು. ಯೇಸು ತನ್ನ ಹಿಂಬಾಲಕರಿಗೆ ಎಲ್ಲೆಡೆ ಹೋಗಿ ತನ್ನ ರಕ್ಷಣೆಯ ಸುವಾರ್ತೆಯನ್ನು ಪ್ರಪಂಚದಾದ್ಯಂತಎಲ್ಲರಿಗೂ ಹೇಳಲು ಬೋಧಿಸಿದನು.
ಯೇಸು ಹೇಳಿದ್ದು - ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡಇರುತ್ತೇನೆ.
ನಂತರ ಯೇಸು ಅವರ ಕಣ್ಣುಗಳ ಮುಂದೆಯೇ ಪರಲೋಕಕ್ಕೆ ಒಯ್ಯಲ್ಪಟ್ಟನು. ಒಂದು ದಿನ, ಯೇಸು ತಾನು ಹೋದ ರೀತಿಯಲ್ಲಿಯೇ ತಿರಿಗಿ ಬರುತ್ತಾನೆ. ಆತನನ್ನುಪ್ರೀತಿಸದ ಮತ್ತು ವಿಧೇಯರಾಗದೆ ಇರುವವರನ್ನು ಆತನು ನಿತ್ಯವಾಗಿ ಶಿಕ್ಷಿಸುವನು. ಆತನನ್ನು ಪ್ರೀತಿಸಿ ವಿಧೇಯತೆ ತೋರಿಸಿದವರನ್ನು ಆತನು ಎಂದೆಂದಿಗೂ ಸ್ವೀಕರಿಸುತ್ತಾನೆಮತ್ತು ಪ್ರತಿಫಲವನ್ನು ಕೊಡುತ್ತಾನೆ. ನಾವು ಆತನೊಂದಿಗೆ ಹೊಸ ಪರಲೋಕದಲ್ಲಿ ಮತ್ತು ಹೊಸ ಭೂಮಿಯಲ್ಲಿ ನಿತ್ಯವಾಗಿ ಬದುಕುತ್ತೇವೆ.
ನನ್ನ ಪಾಪಗಳಿಗಾಗಿ ಯೇಸು ಮಾಡಿದ ಬಲಿದಾನವನ್ನು ನಾನು ನಂಬಿ ಅಂಗೀಕರಿಸಿದ್ದೇನೆ. ಆತನು ನನ್ನನ್ನು ಶುದ್ಧನನ್ನಾಗಿ ಮಾಡಿದ್ದಾನೆ ಮತ್ತು ದೇವರ ಕುಟುಂಬದ ಭಾಗವಾಗಿನನ್ನನ್ನು ಪುನಃಸ್ಥಾಪಿಸಿದ್ದಾನೆ. ಆತನು ನನ್ನನ್ನು ಪ್ರೀತಿಸುತ್ತಾನೆ, ಮತ್ತು ನಾನು ಆತನನ್ನು ಪ್ರೀತಿಸುತ್ತೇನೆ ಮತ್ತು ಆತನ ರಾಜ್ಯದಲ್ಲಿ ಆತನೊಂದಿಗೆ ನಿತ್ಯವಾಗಿ ಜೀವಿಸುತ್ತೇವೆ. ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಈ ವರವನ್ನು ಸ್ವೀಕರಿಸಬೇಕೆಂದು ಬಯಸುತ್ತಾನೆ. ನೀವು ಇದೀಗ ಅದನ್ನು ಮಾಡಲು ಬಯಸುವಿರಾ?
ಕಥೆಯನ್ನು ಹೇಳಲು ನಿಮಗೆ ಸುಗಮವಾಗುವವರೆಗೆ ಸುವಾರ್ತೆಯ ಈ ಪ್ರಸ್ತುತಿಯನ್ನು ನೀವೇ ಅಭ್ಯಾಸ ಮಾಡಿ.
ನಿಮ್ಮನ್ನೇ ಕೇಳಿ
- ನೀವು ಈ ಕಥೆಯನ್ನು ನೆನಪಿನ ಮೂಲಕ ಹಂಚಿಕೊಳ್ಳಬಹುದೇ? ಪ್ರತಿಯೊಬ್ಬರೂ ಅಭ್ಯಾಸದೊಂದಿಗೆ ಸುವಾರ್ತೆಯ ಕಥೆಯನ್ನು ಹೇಳುವಲ್ಲಿ ಸುಧಾರಿಸುತ್ತಾರೆ. ಈಗ ನಿಲ್ಲಿಸಿ 3 ಸಾರಿ ಅಭ್ಯಾಸ ಮಾಡಿ.
- ಈ ಕಥೆಯಿಂದ ನೀವು ಮಾನವಕುಲದ ಬಗ್ಗೆ ಏನನ್ನು ಕಲಿಯುತ್ತೀರಿ?
- ನೀವು ದೇವರ ಬಗ್ಗೆ ಏನ್ನನು ಕಲಿಯುತ್ತೀರಿ?
- ಈ ರೀತಿಯ ಕಥೆಯನ್ನು ಹೇಳುವ ಮೂಲಕ ದೇವರ ಕಥೆಯನ್ನು ಹಂಚಿಕೊಳ್ಳುವುದು ಸುಲಭ ಅಥವಾ ಕಷ್ಟ ಎಂದು ನೀವು ಭಾವಿಸುತ್ತೀರಾ?
ನೀವು ಕಳೆದುಕೊಳ್ಳುತ್ತಿದ್ದೀರಿ. ಈಗ ನೋಂದಣಿ ಮಾಡಿ!
- ನಿಮ್ಮ ವೈಯಕ್ತಿಕ ತರಬೇತಿ ಪ್ರಗತಿಯನ್ನು ಟ್ರ್ಯಾಕ್ ಮಾಡಿ
- ಗುಂಪು ಯೋಜನೆ ಸಾಧನಗಳನ್ನು ಪಡೆದುಕೊಳ್ಳುವುದು
- ತರಬೇತುದಾರರೊಂದಿಗೆ ಸಂಪರ್ಕ ಸಾಧಿಸಿ
- ಪ್ರಪಂಚದ ದೃಷ್ಟಿಗೆ ನಿಮ್ಮ ಪ್ರಯತ್ನವನ್ನು ಸೇರಿಸಿ!
ಹೆಚ್ಚಿಸುವ ಶಿಷ್ಯರನ್ನು ಮಾಡಲು ಮತ್ತು ಸಭಾಸ್ಥಾಪನೆಯನ್ನು ಹೆಚ್ಚಿಸುವ ಸರಳ ಮೂಲತತ್ವ, ಕಾರ್ಯವಿಧಾನ ಮತ್ತು ಅಭ್ಯಾಸಗಳನ್ನು ಕಲಿಯುವದಕ್ಕಾಗಿ ಭಾಗವಹಿಸುವವರನ್ನು ಚಿಕ್ಕ ಗುಂಪುಗಳಿಗಾಗಿ ಜುಮ್ ಆನ್ ಲೈನ್ ಉಪಯೋಗಿಸುತ್ತದೆ.
ಜೂಮ್ ದೊಡ್ಡ ದರ್ಶನದ ಭಾಗವಾಗಿ ಜೂಮ್ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತದೆ.