ಭಾಷೆ


English English
العربية Arabic
العربية - الأردن Arabic (Jordanian)
العربية التونسية Arabic (Tunisian)
Sign Language American Sign Language
বাংলা Bengali (India)
भोजपुरी Bhojpuri
Bosanski Bosnian
中文(繁體,香港) Cantonese (Traditional)
中文(简体) Chinese (Simplified)
中文(繁體) Chinese (Traditional)
Hrvatski Croatian
Français French
Deutsch German
ગુજરાતી Gujarati
Hausa Hausa
हिन्दी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
മലയാളം Malayalam
मराठी Marathi
नेपाली Nepali
ଓଡ଼ିଆ Oriya
فارسی Persian/Farsi
Polski Polish
Português Portuguese
ਪੰਜਾਬੀ Punjabi
Русский Russian
Română Romanian
Slovenščina Slovenian
Soomaali Somali
Español Spanish
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اردو Urdu
Tiếng Việt Vietnamese
Yorùbá Yoruba

ದೇವರ ರಾಜ್ಯದ ಆರ್ಥಿಕತೆ

ತನ್ನ ರಾಜ್ಯದ ಆರ್ಥಿಕತೆಯಲ್ಲಿ ನಮಗೆ ಪ್ರತಿಫಲವನ್ನು ಕೊಡುವುದು ನಾವು ಪಡೆಯುವದರಿಂದಲ್ಲ ಆದರೆ ನಾವು ಕೊಡುವದರಿಂದ ಆಗಿದೆ ಎಂದು ದೇವರು ನಮಗೆ ತೋರಿಸುತ್ತಿದ್ದಾನೆ. ಕರ್ತನು ನಮ್ಮೊಂದಿಗೆ ಏನನ್ನು ಹಂಚಿಕೊಂಡಿದ್ದಾನೋ ಅದಕ್ಕೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಾವು ನಂಬಿಗಸ್ತರಾಗಿರುವಾಗ, ಆತನು ಇನ್ನೂ ಹೆಚ್ಚಿನದನ್ನು ಹಂಚಿಕೊಳ್ಳಲು ವಾಗ್ದಾನ ಮಾಡುತ್ತಿದ್ದಾನೆ. ಯೇಸು ಹೀಗೆ ಹೇಳಿದನು – ಯಾರು ಚಿಕ್ಕ ವಿಷಯದಲ್ಲಿ ನಂಬಿಗಸ್ತನಾಗಿರುವನೋ ಅವನನ್ನು ಹೆಚ್ಚಿನ ವಿಷಯದಲ್ಲಿ ನಂಬಬಹುದು. ಇದು ಆಳವಾದ ಒಳನೋಟಗಳಿಗೆ, ಹೆಚ್ಚಿನ ಅನ್ಯೋನ್ಯತೆ ಮತ್ತು ಸಮೃದ್ಧಿಯಾದ ಜೀವನವನ್ನು ನಡೆಸಲು ದೇವರು ನಮ್ಮನ್ನು ಸೃಷ್ಟಿಸಿದ ಮಾರ್ಗವಾಗಿದೆ. ದೇವರು ನಮಗಾಗಿ ಈಗಾಗಲೇ ಯೋಜಿಸಿರುವ ಒಳ್ಳೆಯ ಕಾರ್ಯಗಳಲ್ಲಿ ನಾವು ನಡೆಯಬಹುದಾದ ಮಾರ್ಗವಾಗಿದೆ.

ಈ ವಿಡಿಯೋ ವೀಕ್ಷಿಸಿ

ದೇವರ ರಾಜ್ಯದ ಆರ್ಥಿಕತೆಯಲ್ಲಿ, ನಾವು ಏನು ಕೊಡುತ್ತೇವೋ ಅದರಿಂದ ನಾವು ಲಾಭ ಪಡೆಯುತ್ತೇವೆ. ಇದು ಆತ್ಮೀಕ ಉಸಿರಾಟಕ್ಕೆ ಆಧಾರವಾಗಿದೆ. ಕರ್ತನು ನಮಗೆ ತಿಳಿಸುವವುಗಳಿಗೆ ವಿಧೇಯರಾಗಲು ಮತ್ತು ಹಂಚಿಕೊಳ್ಳಲು ನಾವು ನಂಬಿಗಸ್ತರಾಗಿರುವಾಗ, ಆತನು ನಮ್ಮೊಂದಿಗೆ ಹೆಚ್ಚು ಸ್ಪಷ್ಟವಾಗಿ ಮತ್ತು ಸಂಪೂರ್ಣವಾಗಿ ಸಂಭಾಷಿಸುತ್ತಾನೆ. ಇದು ಆಳವಾದ ಒಳನೋಟಗಳಿಗೆ, ದೇವರೊಂದಿಗೆ ಹೆಚ್ಚಿನ ಅನ್ಯೋನ್ಯತೆ ಮತ್ತು ಆತನು ನಮಗಾಗಿ ಉದ್ದೇಶಿಸಿರುವ ಸಮೃದ್ಧಿಯಾದ ಜೀವನವನ್ನು ನಡೆಸುವ ಮಾರ್ಗವಾಗಿದೆ. ದೇವರು ನಮಗಾಗಿ ಮೊದಲೇ ಯೋಜಿಸಿರುವ ಒಳ್ಳೆಯ ಕಾರ್ಯಗಳಲ್ಲಿ ನಾವು ನಡೆಯಬಹುದಾದ ಮಾರ್ಗವಾಗಿದೆ. ಇದರರ್ಥ ಕ್ರಿಸ್ತನ ದೇಹದಲ್ಲಿ (ಸಭೆ) ನಾವು ಒಬ್ಬರಿಗೊಬ್ಬರು ಮಾಡಬಹುದಾದ ಅತ್ಯಂತ ಪ್ರೀತಿಯ ವಿಷಯವೆಂದರೆ ಉಭಯ ಲೆಕ್ಕ ಒಪ್ಪಿಸಬೇಕಾದದ್ದನ್ನು ಅಭ್ಯಾಸ ಮಾಡುವುದು. ಅಂದರೆ, ಕರ್ತನು ನಮಗೆ ತಿಳಿಸುವದನ್ನು ವಿಧೇಯರಾಗಲು ಮತ್ತು ಹಂಚಿಕೊಳ್ಳಲು; ಅದನ್ನು ಮಾಡಲು, ಬೋಧಿಸಲು, ಅಭ್ಯಾಸ ಮಾಡಲು ಮತ್ತು ಇತರರೊಂದಿಗೆ ಹಂಚಿಕೊಳ್ಳಲು ಇದು ಲೆಕ್ಕ ಒಪ್ಪಿಸಬೇಕಾದ ಸಂಗತಿಯಾಗಿದೆ. ದೇವರ ರಾಜ್ಯದ ಆರ್ಥಿಕತೆಯಿಂದ ಜೀವಿಸುವುದು ಶಿಷ್ಯರಾಗುವ ಪ್ರಮುಖ ಭಾಗವಾಗಿದೆ. ನಾವು ಆಶೀರ್ವಾದವಾಗಿರಲು ಆಶೀರ್ವದಿಸಲ್ಪಟ್ಟಿದ್ದೇವೆ. ನಾವು ಹಿಂಬಾಲಕರು ಮತ್ತು ನಾಯಕರಾಗಿದ್ದೇವೆ. ನಾವು ಕಲಿಯುವವರು ಮತ್ತು ಶಿಕ್ಷಕರಾಗಿದ್ದೇವೆ. ಈ ರೀತಿಯಾಗಿ ನಾವು ದೇವರ ನಾಯಕತ್ವವನ್ನು ಅತ್ಯುತ್ತಮವಾಗಿ ನಿರ್ವಹಿಸಬಹುದು. ನಾವು ದೇವರ ರಾಜ್ಯವನ್ನು ಪ್ರವೇಶಿಸಿದ ತಕ್ಷಣ ಈ ಪ್ರಕ್ರಿಯೆಯು ಪ್ರಾರಂಭವಾಗಬೇಕು. ಈ ರೀತಿಯಲ್ಲಿ ಸೇವೆಯನ್ನು ಪ್ರಾರಂಭಿಸಲು ನಾವು "ಪ್ರವೀಣರಾಗುವವರೆಗೆ" ನಾವು ಕಾದಿರಬಾರದು. ಬದಲಾಗಿ, ಈ ರೀತಿಯಲ್ಲಿ ಸೇವೆ ಮಾಡುವ ಮೂಲಕ ನಾವು ಪ್ರವೀಣರಾಗುತ್ತೇವೆ. ನಾವು ಉಸಿರಾಡುತ್ತೇವೆ ಮತ್ತು ದೇವರಿಂದ ಕೇಳುತ್ತೇವೆ. ನಾವು ಉಸಿರಾಡುತ್ತೇವೆ ಮತ್ತು ನಾವು ಕೇಳುವುದಕ್ಕೆ ವಿಧೇಯರಾಗುತ್ತೇವೆ ಮತ್ತು ಇತರರೊಂದಿಗೆ ಹಂಚಿಕೊಳ್ಳುತ್ತೇವೆ.

ನಿಮ್ಮನ್ನೇ ಕೇಳಿ