ಭಾಷೆ


English English
العربية Arabic
العربية - الأردن Arabic (Jordanian)
العربية التونسية Arabic (Tunisian)
Sign Language American Sign Language
বাংলা Bengali (India)
भोजपुरी Bhojpuri
Bosanski Bosnian
中文(繁體,香港) Cantonese (Traditional)
中文(简体) Chinese (Simplified)
中文(繁體) Chinese (Traditional)
Hrvatski Croatian
Français French
Deutsch German
ગુજરાતી Gujarati
Hausa Hausa
हिन्दी Hindi
Bahasa Indonesia Indonesian
Italiano Italian
ಕನ್ನಡ Kannada
한국어 Korean
کوردی Kurdish
ພາສາລາວ Lao
𑒧𑒻𑒟𑒱𑒪𑒲 Maithili
മലയാളം Malayalam
मराठी Marathi
नेपाली Nepali
ଓଡ଼ିଆ Oriya
فارسی Persian/Farsi
Polski Polish
Português Portuguese
ਪੰਜਾਬੀ Punjabi
Русский Russian
Română Romanian
Slovenščina Slovenian
Soomaali Somali
Español Spanish
Kiswahili Swahili
தமிழ் Tamil
తెలుగు Telugu
ไทย Thai
Türkçe Turkish
اردو Urdu
Tiếng Việt Vietnamese
Yorùbá Yoruba

ಸುವಾರ್ತೆ ಮತ್ತು ಅದನ್ನು ಹಂಚಿಕೊಳ್ಳುವುದು ಹೇಗೆ

ದೇವರ ಕಥೆಯನ್ನು ಹಂಚಿಕೊಳ್ಳಲು ಹಲವು ಮಾರ್ಗಗಳಿವೆ. ಉತ್ತಮ ಮಾರ್ಗವು ನೀವು ಹಂಚಿಕೊಳ್ಳುತ್ತಿರುವ ವ್ಯಕ್ತಿ ಮತ್ತು ಅವರ ಪ್ರಪಂಚದ ದೃಷ್ಟಿಕೋನ ಮತ್ತು ಅವರ ಜೀವನದ ಅನುಭವಗಳ ಮೇಲೆ ಅವಲಂಬಿತವಾಗಿರುತ್ತದೆ. ಕೇಳಲು ಸಿದ್ಧರಿರುವ ಹೃದಯಗಳ ಮೇಲೆ ಕೆಲಸ ಮಾಡಲು ಹಂಚಿಕೊಳ್ಳಲು ಸಿದ್ಧರಿರುವ ಹೃದಯಗಳನ್ನು ದೇವರು ಉಪಯೋಗಿಸುತ್ತಾನೆ. ದೇವರ ಕಥೆಯನ್ನು ಹಂಚಿಕೊಳ್ಳಲು ಒಂದು ಮಾರ್ಗವೆಂದರೆ ದೇವರ ಸೃಷ್ಟಿಯಿಂದ ಈ ಯುಗದ ಅಂತ್ಯದಲ್ಲಿ ಆತನ ನ್ಯಾಯತೀರ್ಪಿನವರೆಗೆ ಏನಾಯಿತು ಎಂಬುದನ್ನು ವಿವರಿಸುವುದಾಗಿದೆ.

ಈ ವಿಡಿಯೋ ವೀಕ್ಷಿಸಿ

ದೇವರ ಕಥೆ: ಸೃಷ್ಟಿ ಇಂದ ನ್ಯಾಯತೀರ್ಪಿನ ಶೈಲಿಯ ವರೆಗೆ

ಆದಿಯಲ್ಲಿ, ದೇವರು ಇಡೀ ಪ್ರಪಂಚವನ್ನು ಮತ್ತು ಅದರಲ್ಲಿರುವ ಎಲ್ಲವನ್ನೂ ಉಂಟುಮಾಡಿದನು.

ಆತನು ಮೊದಲ ಪುರುಷನು ಮತ್ತು ಮೊದಲ ಸ್ತ್ರೀಯನ್ನು ಉಂಟುಮಾಡಿದನು. ಆತನು ಅವುಗಳನ್ನು ಸುಂದರವಾದ ಉದ್ಯಾನವನದಲ್ಲಿ ಇಟ್ಟನು. ಆತನು ಅವರನ್ನು ತನ್ನ ಕುಟುಂಬದ ಭಾಗವನ್ನಾಗಿ ಮಾಡಿಕೊಂಡು ಅವರೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದನು.

ಅವರು ನಿತ್ಯವಾಗಿ ಬದುಕಲು ಅವರನ್ನು ಸೃಷ್ಟಿಸಿದನು. ಸಾವು ಎಂಬುದು ಇರಲಿಲ್ಲ. ಈ ಪರಿಪೂರ್ಣ ಸ್ಥಳದಲ್ಲಿಯೂ ಸಹ, ಮನುಷ್ಯನು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಪಾಪ ಮತ್ತು ದುಃಖವನ್ನು ಜಗತ್ತಿಗೆ ತಂದನು. ದೇವರು ಮನುಷ್ಯನನ್ನು ತೋಟದಿಂದ ಹೊರಹಾಕಿದನು. ಮನುಷ್ಯನು ಮತ್ತು ದೇವರ ನಡುವಿನ ಸಂಬಂಧವು ಮುರಿದುಹೋಯಿತು. ಈಗ ಮನುಷ್ಯನು ಸಾವನ್ನು ಎದುರಿಸಬೇಕಾಯಿತು. ನೂರಾರು ವರ್ಷಗಳಿಂದ, ದೇವರು ಜಗತ್ತಿಗೆ ಸಂದೇಶವಾಹಕರನ್ನು ಕಳುಹಿಸುತ್ತಲೇ ಇದ್ದನು. ಅವರು ಮನುಷ್ಯನಿಗೆ ಅವನ ಪಾಪವನ್ನು ನೆನಪಿಸಿದನು ಆದರೆ ದೇವರ ನಂಬಿಗಸ್ತಿಕೆ ಮತ್ತು ಜಗತ್ತಿಗೆ ರಕ್ಷಕನನ್ನು ಕಳುಹಿಸುವ ವಾಗ್ದಾನದ ಬಗ್ಗೆ ಹೇಳಿದರು.

ರಕ್ಷಕನು ದೇವರು ಮತ್ತು ಮನುಷ್ಯನ ನಡುವಿನ ನಿಕಟ ಸಂಬಂಧವನ್ನು ಪುನಃಸ್ಥಾಪಿಸುವನು. ರಕ್ಷಕನು ಮನುಷ್ಯನನ್ನು ಸಾವಿನಿಂದ ರಕ್ಷಿಸುತ್ತಾನೆ. ರಕ್ಷಕನು ನಿತ್ಯಜೀವವನ್ನು ಕೊಡುತ್ತಾನೆ ಮತ್ತು ನಿತ್ಯವಾಗಿ ಮನುಷ್ಯರೊಂದಿಗೆ ಇರುತ್ತಾನೆ. ದೇವರು ನಮ್ಮನ್ನು ಎಷ್ಟೋ ಪ್ರೀತಿಸಿದನು, ಅಂದರೆ ಸರಿಯಾದ ಸಮಯ ಬಂದಾಗ, ಆತನು ತನ್ನ ಮಗನನ್ನು ಆ ರಕ್ಷಕನಾಗಿರಲು ಲೋಕಕ್ಕೆ ಕಳುಹಿಸಿದನು.

ಯೇಸು ದೇವರ ಮಗನಾಗಿದ್ದನು. ಆತನು ಕನ್ಯೆಯ ಮೂಲಕ ಜಗತ್ತಿನಲ್ಲಿ ಜನಿಸಿದನು. ಆತನು ಪರಿಪೂರ್ಣ ಜೀವನವನ್ನು ನಡೆಸಿದನು. ಆತನು ಎಂದಿಗೂ ಪಾಪ ಮಾಡಲಿಲ್ಲ. ಯೇಸು ದೇವರ ಬಗ್ಗೆ ಜನರಿಗೆ ಬೊಧಿಸಿದನು. ಆತನು ತನ್ನ ಮಹಾನ್ ಶಕ್ತಿಯನ್ನು ತೋರಿಸುವ ಅನೇಕ ಅದ್ಭುತಗಳನ್ನು ಮಾಡಿದನು. ಆತನು ಅನೇಕ ದೆವ್ವಗಳನ್ನು ಓಡಿಸಿದನು. ಆತನು ಅನೇಕ ಜನರನ್ನು ಗುಣಪಡಿಸಿದನು. ಕುರುಡರಿಗೆ ಕಾಣುವಂತೆ ಮಾಡಿದನು. ಆತನು ಕಿವುಡರನ್ನು ಕೇಳುವಂತೆ ಮಾಡಿದನು. ಕುಂಟರು ನಡೆಯುವಂತೆ ಮಾಡಿದನು. ಯೇಸು ಸತ್ತವರನ್ನು ಸಹ ಎಬ್ಬಿಸಿದನು. ಅನೇಕ ಧಾರ್ಮಿಕ ಮುಖಂಡರು ಯೇಸುವಿನ ಬಗ್ಗೆ ಹೆದರಿಕೊಂಡರು ಮತ್ತು ಅಸೂಯೆ ಪಟ್ಟರು.

ಅವರು ಆತನನ್ನು ಕೊಲ್ಲಲು ಬಯಸಿದರು. ಆತನು ಎಂದಿಗೂ ಪಾಪ ಮಾಡದ ಕಾರಣ, ಯೇಸು ಸಾಯಬೇಕಾಗಿರಲಿಲ್ಲ.

ಆದರೆ ಆತನು ನಮ್ಮೆಲ್ಲರಿಗೂ ಯಜ್ಞವಾಗಿ ಸಾಯಲು ಆಯ್ಕೆಮಾಡಿಕೊಂಡನು. ಆತನ ನೋವಿನ ಮರಣವು ಮಾನವಕುಲದ ಪಾಪಗಳನ್ನು ಮುಚ್ಚಿಹಾಕಿತು. ನಂತರ, ಯೇಸುವನ್ನು ಸಮಾಧಿಯಲ್ಲಿ ಹೂಣಿಡಲಾಯಿತು. ಯೇಸು ಮಾಡಿದ ತ್ಯಾಗವನ್ನು ದೇವರು ನೋಡಿ ಅದನ್ನು ಸ್ವೀಕರಿಸಿದನು. ಮೂರನೆಯ ದಿನದಲ್ಲಿ ಯೇಸುವನ್ನು ಸತ್ತವರೊಳಗಿಂದ ಎಬ್ಬಿಸುವ ಮೂಲಕ ದೇವರು ತನ್ನ ಅಂಗೀಕಾರವನ್ನು ತೋರಿಸಿದನು.

ನಮ್ಮ ಪಾಪಗಳಿಗಾಗಿ ನಾವು ಯೇಸುವಿನ ತ್ಯಾಗವನ್ನು ನಂಬಿ ಸ್ವೀಕರಿಸಿದರೆ -- ನಾವು ನಮ್ಮ ಪಾಪಗಳಿಂದ ದೂರವಿದ್ದರೆ ಮತ್ತು ಯೇಸುವನ್ನು ಅನುಸರಿಸಿದರೆ, ದೇವರು ನಮ್ಮನ್ನು ಎಲ್ಲಾ ಪಾಪಗಳಿಂದ ಬಿಡಿಸಿ ಶುದ್ಧೀಕರಿಸುತ್ತಾನೆ ಮತ್ತು ನಮ್ಮನ್ನು ತನ್ನ ಕುಟುಂಬಕ್ಕೆ ಮರಳಿ ಸ್ವಾಗತಿಸುತ್ತಾನೆ ಎಂದು ದೇವರು ಹೇಳಿದನು.

ನಮ್ಮೊಳಗೆ ವಾಸಿಸಲು ಮತ್ತು ಯೇಸುವನ್ನು ಅನುಸರಿಸಲು ನಮಗೆ ಸಾಧ್ಯವಾಗುವಂತೆ ಮಾಡಲು ದೇವರು ಪವಿತ್ರಾತ್ಮನನ್ನು ಕಳುಹಿಸಿದನು. ಈ ಪುನಃಸ್ಥಾಪಿಸಿದ ಸಂಬಂಧವನ್ನು ತೋರಿಸಲು ಮತ್ತು ಮುದ್ರಿಸಲ್ಪಡಲು ನಾವು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿದ್ದೇವೆ.

ಸಾವಿನ ಸಂಕೇತವಾಗಿ ನಾವು ನೀರಿನ ಕೆಳಗೆ ಸಮಾಧಿ ಮಾಡಲ್ಪಟ್ಟಿದ್ದೇವೆ. ಹೊಸ ಜೀವನದ ಸಂಕೇತವಾಗಿ ನಾವು ಯೇಸುವನ್ನು ಅನುಸರಿಸಲು ನೀರಿನಿಂದ ಎಬ್ಬಿಸಲ್ಪಟ್ಟಿದ್ದೇವೆ.

ಯೇಸು ಸತ್ತವರೊಳಗಿಂದ ಎದ್ದುಬಂದ ನಂತರ, ಆತನು ಭೂಮಿಯ ಮೇಲೆ 40 ದಿನಗಳನ್ನು ಕಳೆದನು.

ಯೇಸು ತನ್ನ ಹಿಂಬಾಲಕರಿಗೆ ಎಲ್ಲೆಡೆ ಹೋಗಿ ತನ್ನ ರಕ್ಷಣೆಯ ಸುವಾರ್ತೆಯನ್ನು ಪ್ರಪಂಚದಾದ್ಯಂತ ಎಲ್ಲರಿಗೂ ಹೇಳಲು ಬೋಧಿಸಿದನು. ಯೇಸು ಹೇಳಿದ್ದು - ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ, ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನಮಾಡಿಸಿ ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವದಕ್ಕೆ ಅವರಿಗೆ ಉಪದೇಶ ಮಾಡಿರಿ. ನೋಡಿರಿ, ನಾನು ಯುಗದ ಸಮಾಪ್ತಿಯವರೆಗೂ ಎಲ್ಲಾ ದಿವಸ ನಿಮ್ಮ ಸಂಗಡ ಇರುತ್ತೇನೆ.

ನಂತರ ಯೇಸು ಅವರ ಕಣ್ಣುಗಳ ಮುಂದೆಯೇ ಪರಲೋಕಕ್ಕೆ ಒಯ್ಯಲ್ಪಟ್ಟನು. ಒಂದು ದಿನ, ಯೇಸು ತಾನು ಹೋದ ರೀತಿಯಲ್ಲಿಯೇ ತಿರಿಗಿ ಬರುತ್ತಾನೆ. ಆತನನ್ನು ಪ್ರೀತಿಸದ ಮತ್ತು ವಿಧೇಯರಾಗದೆ ಇರುವವರನ್ನು ಆತನು ನಿತ್ಯವಾಗಿ ಶಿಕ್ಷಿಸುವನು. ಆತನನ್ನು ಪ್ರೀತಿಸಿ ವಿಧೇಯತೆ ತೋರಿಸಿದವರನ್ನು ಆತನು ಎಂದೆಂದಿಗೂ ಸ್ವೀಕರಿಸುತ್ತಾನೆ ಮತ್ತು ಪ್ರತಿಫಲವನ್ನು ಕೊಡುತ್ತಾನೆ. ನಾವು ಆತನೊಂದಿಗೆ ಹೊಸ ಪರಲೋಕದಲ್ಲಿ ಮತ್ತು ಹೊಸ ಭೂಮಿಯಲ್ಲಿ ನಿತ್ಯವಾಗಿ ಬದುಕುತ್ತೇವೆ.

ನನ್ನ ಪಾಪಗಳಿಗಾಗಿ ಯೇಸು ಮಾಡಿದ ಬಲಿದಾನವನ್ನು ನಾನು ನಂಬಿ ಅಂಗೀಕರಿಸಿದ್ದೇನೆ. ಆತನು ನನ್ನನ್ನು ಶುದ್ಧನನ್ನಾಗಿ ಮಾಡಿದ್ದಾನೆ ಮತ್ತು ದೇವರ ಕುಟುಂಬದ ಭಾಗವಾಗಿ ನನ್ನನ್ನು ಪುನಃಸ್ಥಾಪಿಸಿದ್ದಾನೆ. ಆತನು ನನ್ನನ್ನು ಪ್ರೀತಿಸುತ್ತಾನೆ, ಮತ್ತು ನಾನು ಆತನನ್ನು ಪ್ರೀತಿಸುತ್ತೇನೆ ಮತ್ತು ಆತನ ರಾಜ್ಯದಲ್ಲಿ ಆತನೊಂದಿಗೆ ನಿತ್ಯವಾಗಿ ಜೀವಿಸುತ್ತೇವೆ. ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಈ ವರವನ್ನು ಸ್ವೀಕರಿಸಬೇಕೆಂದು ಬಯಸುತ್ತಾನೆ. ನೀವು ಇದೀಗ ಅದನ್ನು ಮಾಡಲು ಬಯಸುವಿರಾ?

ಕಥೆಯನ್ನು ಹೇಳಲು ನಿಮಗೆ ಸುಗಮವಾಗುವವರೆಗೆ ಸುವಾರ್ತೆಯ ಈ ಪ್ರಸ್ತುತಿಯನ್ನು ನೀವೇ ಅಭ್ಯಾಸ ಮಾಡಿ.

ನಿಮ್ಮನ್ನೇ ಕೇಳಿ